Monday, November 24, 2025
Google search engine
Homeಸಿನಿ ಸಮಾಚಾರಅಕ್ಕ ಸಮೇಳನದಲ್ಲಿ ಮಿನುಗಿದ ಎರಡು ನಕ್ಷತ್ರಗಳು - ಒಂದು ಅನುಭವ

ಅಕ್ಕ ಸಮೇಳನದಲ್ಲಿ ಮಿನುಗಿದ ಎರಡು ನಕ್ಷತ್ರಗಳು – ಒಂದು ಅನುಭವ

ಅಕ್ಕ ಸಮೇಳನದಲ್ಲಿ ಮಿನುಗಿದ ಎರಡು ನಕ್ಷತ್ರಗಳು – ಒಂದು ಅನುಭವ…

ಒಂದೇ ಘಳಿಗೆಯಲ್ಲಿ ಬೇರೆ ಬೇರೆ ಜಾಗದಲ್ಲಿ ಹುಟ್ಟಿದ ಕಂದಮ್ಮಗಳು ಎರಡು ನಕ್ಷತ್ರಗಳ ಪ್ರಭಾವದಿಂದ ಭಿನ್ನ ಗ್ರಹಚಾರ ಫಲ ಹೊಂದುತ್ತದೆ. ಒಬ್ಬರು ರಾಜವಂಶದಲ್ಲಿ ಜನಿಸಬಹುದು ಮತ್ತೊಬ್ಬರು ಗುಡಿಸಿಲಿನಲ್ಲಿ ಜನಿಸಬಹುದು. ಈ ವಿಚಾರಗಳು ಎಲ್ಲರಿಗೂ ಗೊತ್ತು.  ಆದರೆ ಇಂದಿನ ಈ ಮಾತು ಎರಡು ಭಿನ್ನ ನಕ್ಷತ್ರಗಳು ಮತ್ತು ಅವರ ಕಾರ್ಯಕ್ರಮದ ಬಗ್ಗೆ.  ವಿಕ್ರಂ ಸೂರಿ ಮತ್ತು ನಮಿತಾ ರಾವ್ ಎಂಬ ಎರಡು ನಕ್ಷತ್ರಗಳು ಎರಡು ಭಿನ್ನ ದಿನಗಳಲ್ಲಿ, ಎರಡು ಭಿನ್ನ ಘಳಿಗೆಗಳಲ್ಲಿ, ಎರಡು ಭಿನ್ನ ಸ್ಥಳಗಳಲ್ಲೇ ಜನಿಸಿದ್ದರೂ ಒಗ್ಗೂಡಿದ್ದು ಕಲೆಯಿಂದ.  ಒಂದಾಗಿ ಪಯಣಿಸುತ್ತಿರುವ ಯಾನವೂ ಕಲಾಸೇವೆಗಾಗಿ. ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದಾರೆ ಎಂದರೂ ಅಡ್ಡಿಯಿಲ್ಲ. ಇವರ ಕಲ್ಪನೆಯ ಕಾರ್ಯಕ್ರಮಗಳು ಈವರೆಗೆ ಹಲವಾರು ಮೂಡಿಬಂದಿದೆ. ಇತ್ತೀಚಿನ ಪರಿಕಲ್ಪನೆಯೇ ಅಕ್ಕ ೨೦೨೪ರಲ್ಲಿ ಮೂಡಿಬಂದ “ಎರಡು ನಕ್ಷತ್ರಗಳು”.

೧೨ನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಳನವು ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದಲ್ಲಿ ಆಗಸ್ಟ್ ೩೦, ೩೧ ಮತ್ತು ಸೆಪ್ಟೆಂಬರ್ ಒಂದನೆಯ ತಾರೀಖುಗಳಂದು ನಡೆಯಿತು. ‘ಎರಡು ನಕ್ಷತ್ರಗಳು’ ಕಾರ್ಯಕ್ರಮವು ಮುಖ್ಯ ವೇದಿಕೆಯಾದ “ಡಾ|ಪುನೀತ್ ರಾಜಕುಮಾರ್’ ಸಭಾಂಗಣದಲ್ಲಿ ನಡೆಯಿತು.  ಈ ಕಾರ್ಯಕ್ರಮದ ವೈಶಿಷ್ಟ್ಯವೇನು?  ಬಲು ಸರಳವಾಗಿ ಹೇಳಿದರೆ ‘ಡಾ| ರಾಜ್ ಕುಮಾರ್ ಮತ್ತು ಡಾ| ಪುನೀತ್ ರಾಜಕುಮಾರ್’ ಅವರುಗಳು ಕೆಲವು ಚಿತ್ರಗಳಿಂದ ಆಯ್ದ ದೃಶ್ಯ ಮತ್ತು ಗೀತೆಯ ವೈವಿಧ್ಯ ದೃಶ್ಯಗಳ  ವೈಭವವನ್ನು ನಮ್ಮ ಕಣ್ಣ ಮುಂದೆ ಮತ್ತೆ ತಂದಿದ್ದೇ  ವೈಶಿಷ್ಟ್ಯ.

ಐತಿಹಾಸಿಕ ಚಿತ್ರದ ‘ಇಮ್ಮಡಿ ಪುಲಕೇಶಿ’ ದೃಶ್ಯ ನೋಡಿದಾಗ ವಿಸ್ಮಯವೇ ಆಯ್ತು.  ಬಾಹುಬಲಿ ಚಿತ್ರದ ದೃಶ್ಯ ನೋಡಿದಾಗ ವಾಹ್ ಎನಿಸಿದ್ದು ನಿಜ, ಆದರೆ ಇಂದು ಈ ದೃಶ್ಯವನ್ನು ರಂಗದ ಮೇಲೆ ನೋಡಿದಾಗ, ಅರರೇ, ಅಣ್ಣಾವ್ರು ಬಹಳಾ ವರ್ಷಗಳ ಹಿಂದೆಯೇ ಮಾಡಿ ಬದಿಗೆ ಇರಿಸಿದ್ದಾರಲ್ಲಾ ಅಂತ !  ಅಂದಿನ ಈ ಚಿತ್ರದ ದೃಶ್ಯವನ್ನು ರಂಗದ ಮೇಲೆ ನೋಡಿದ ಖುಷಿ ಅಜರಾಮರ.

ಪೌರಾಣಿಕ ಚಿತ್ರವಾದ ‘ಭಕ್ತ ಪ್ರಹ್ಲಾದ’ ಎಂದೆಂದಿಗೂ ಜನ ಮನದಿಂದ ಮರೆಯಾಗದ ಚಿತ್ರ.  ಕನ್ನಡ ಚಲನಚಿತ್ರದ ಎರಡೂ ನಕ್ಷತ್ರಗಳು ಇಂದು ನಮ್ಮೊಂದಿಗೆ ಇಲ್ಲ ಎಂಬುದು ಸತ್ಯ ಆದರೆ ನಮ್ಮ ಮನದಲ್ಲಿ ಇವರಿಬ್ಬರೂ ಸದಾ ಹಸಿರು ಎಂಬುದನ್ನು ರಂಗ ಮೇಲೆ ತೋರಿದ ರೀತಿ ಬಲು ಸೊಗಸಾಗಿತ್ತು. 

ಮತ್ತೊಂದು ಐತಿಹಾಸಿಕ ದೃಶ್ಯದಲ್ಲಿ ನಮ್ಮೆದುರಿಗೆ ಬಂದಿದ್ದು ‘ಮಯೂರ’.  ರಂಗದ ಮೇಲೆ ಮಯೂರನ ಪಾತ್ರಧಾರಿ ಬಂದಾಗ ಆ ವೇಷಭೂಷಣ ನೋಡಿ ಇಡೀ ಸಭಾಂಗಣ ದಂಗಾಗಿದ್ದು ಸುಳ್ಳಲ್ಲ.  ಏಕಮುಖ ಸಂಭಾಷಣೆಗೆ ತಕ್ಕಂಥಾ ಅಭಿನಯ ಮತ್ತು ‘ನಾನಿರುವುದೇ ನಿಮಗಾಗಿ’ ಎಂಬ ಹಾಡಿಗೆ ಅಭಿನಯವು ಕಣ್  ಕಟ್ಟಿದಂತೆ  ಇದೆ.

ದ್ವಿಪಾತ್ರ ಅಭಿನಯದ ‘ಎರಡು ನಕ್ಷತ್ರಗಳು’ ಬಲು ಮೋಜಾಗಿತ್ತು.  ನಮ್ಮ ನಗರದ ಅವಳಿ-ಜವಳಿ ಅಭಿನಯಿಸಿದ ‘ಕಲ್ಲು ಸಕ್ಕರೆ ಬಾದಾಮಿ ಕುಟ್ಟಿ ಕುಟ್ಟಿ ತಿನ್ನುವೆ’ ಸೊಗಸಾಗಿತ್ತು.

‘ಕವಿರತ್ನ ಕಾಳಿದಾಸ’ದ ದೃಶ್ಯಗಳನ್ನು ತೆರೆಯ ಮೇಲೆ ನೋಡಿ ಆನಂದಿಸಿದೆವು. ಇಲ್ಲಿನ ಕೈಚಳಕ ನಿಜಕ್ಕೂ ಶ್ಲಾಘನೀಯ. ಕುರುಬನ ಪಾತ್ರಧಾರಿ ಮೊದಲಿಗೆ ಹೆಜ್ಜೆ ತೆರೆಯ ಹಿಂದೆ ಹೋದ ಮೇಲೆ ‘ಎಲ್ಲೆಲ್ಲು ನಾನೇ, ಎಲ್ಲೆಲ್ಲೂ ನಾನೇ’ ಎಂದು ಹೆಜ್ಜೆ ಹಾಕಿದವರು ಮತ್ತೋರ್ವ ಪಾತ್ರಧಾರಿ.  ದೇವಿ ಪಾತ್ರಧಾರಿಯಂತೂ ವಂದನೀಯವಾಗಿ ಕಂಡರು.

ಕಮರ್ಷಿಯಲ್ ಚಿತ್ರಗಳ ವಿಭಾಗದಲ್ಲಿ ಮೊದಲಿಗೆ ಭಾಗ್ಯವಂತ. ಆ ಪುಟ್ಟ ಬಾಲಕನ ಪಾತ್ರದ ಬವಣೆಯನ್ನು ಇಂದಿಗೂ ರಂಗದ ಮೇಲೆ ನೋಡಿದಾಗ ದು:ಖವಾಗಿದ್ದು ಸಹಜ. ‘ಕಾಣದಂತೆ ಮಾಯವಾದನು’ ಎಂಬುದನ್ನು ಇನ್ನೆಷ್ಟೇ ಬಾರಿ ಕೇಳಿದರೂ ಬೇಸರವಾಗುವುದೇ ಇಲ್ಲ.

ದುರ್ಗಿ, ಸಾವ್ಕಾರ್ ಸಿದ್ದ ಮತ್ತು ಭದ್ರ ಎಂದರೆ ಯಾವ ಚಿತ್ರ ಎಂದು ಹೇಳಲೇಬೇಕೆ? ಪ್ರಣಯ ದೃಶ್ಯವನ್ನೇ ಅದೆಷ್ಟು ಕಲಾತ್ಮಕವಾಗಿ ತೋರಿಸಬಹುದು ಎಂಬುದು ಮೆಚ್ಚಲೇಬೇಕಾದ ಅಂಶ.

ಅಪ್ಪ-ಮಗ ಅಭಿನಯಿಸಿದ ಬೆಟ್ಟದ ಹೂವು ಚಿತ್ರದ ದೃಶ್ಯಗಳು ಚಲನಚಿತ್ರದಲ್ಲಿ ನೋಡಿದಷ್ಟೇ ಸೊಗಸಾಗಿತ್ತು.  ವನ್ಯ ಮೃಗಗಳ ಪಾತ್ರದಲ್ಲಿ ಚಿಕ್ಕಮಕ್ಕಳೊಂದಿಗೆ ಅಣ್ಣಾವ್ರನ್ನು ‘ಗಂಧದ ಗುಡಿ’ಯಲ್ಲಿ ನೋಡಿದ  ವೀಕ್ಷಕರು ಪುಳಕಗೊಂಡರು .

ನಂತರ ವಿಜೃಂಭಿಸಿದ್ದೇ ಯುವರತ್ನ ಚಿತ್ರದ ರೊಮ್ಯಾಂಟಿಕ್ ಹಾಡಿನ ದೃಶ್ಯಕ್ಕೆ ಹೆಜ್ಜೆ ಹಾಕಿದ ‘ವಿಕ್ರಂ ಸೂರಿ ಮತ್ತು ನಮಿತಾ ರಾವ್’.

ಕಾಣದಂತೆ ಮಾಯವಾದನು ಹಾಡಿಗೆ ಹೆಜ್ಜೆ ಹಾಕಿದ ನಂತರ, ಒಂದು ಸುಂದರ ರಂಗ ವೈಭವದ  ಯಾನ ಪೂರ್ಣವಾಯ್ತು. ತೆರೆ ಎಳೆಯಿತು ಆದರೆ ಹೃದಯದಲ್ಲಿನ  ಅಚ್ಚಳಿಯದ ನೆನಪುಗಳಿಗೆ ತೆರೆ ಎಳೆಯಲಿಲ್ಲ. ಅಂದು’ಗಳು ಇಂದು’ಗಳನ್ನಾಗಿಸಿದ ದೃಶ್ಯಗಳು ಮತ್ತು ಕಾರ್ಯಕ್ರಮವು ಸದಾ ಹಚ್ಚ ಹಸಿರಾಗಿರುತ್ತದೆ.
ಶ್ರೀನಾಥ್ ಭಲ್ಲೆ
ರಿಚ್ಮಂಡ್
ಹೊರನಾಡ ಅಂಕಣಕಾರರು

RELATED ARTICLES
- Advertisment -
Google search engine

Most Popular

Recent Comments

Swarupa Sandarshan - WordPress Downloads -
Deneme Bonusu Veren Siteler +750 TL Ekim 2025 - Güvenilir bahis siteleri Ekim 2025 - En Popüler Slot Oyunları Ekim 2025: Guns N’ Roses oyunu
Casino Sites October 2025: Trusted Online Casino - Betting Sites October 2025: Trusted Live Betting - Top Slot Games October 2025: Guns N’ Roses play