ಅದೇ ಟೀಮು, ಅದೇ ಉತ್ಸಾಹ, ಅದೇ ಶ್ರದ್ಧೆ, ಅದೇ ಶ್ರಮ…ಆದ್ರೆ ನಿರ್ದೇಶಕರು ಮಾತ್ರ ಬೇರೆ!
ನಿಮಗೆ ‘ಉಜ್ವಾಡು’ ಎಂಬ ರಾಜ್ಯಪ್ರಶಸ್ತಿ ಪುರಸ್ಕೃತ ಕೊಂಕಣಿ ಸಿನಿಮಾದ ಬಗ್ಗೆ ಗೊತ್ತಿರಬಹುದು. ಸೆನ್ಸಾರ್ ಬೋರ್ಡ್ ಮಾಜಿ ಸದಸ್ಯೆಯೂ ಆಗಿರುವ ಸಾಮಾಜಿಕ ಕಾರ್ಯಕರ್ತೆ ಮೀರಾ ಅನುರಾಧಾ ಪಡಿಯಾರ್ ನಿರ್ಮಿಸಿರುವ ಈ ಸಿನಿಮಾದ ನಂತರ ಇವರು ಮೌನಕ್ಕೆ ಶರಣಾಗಿದ್ದರು. ಈಗ ಮತ್ತೆ ಹೊಸ ಉತ್ಸಾಹದೊಂದಿಗೆ ಮತ್ತೊಂದು ಕೊಂಕಣಿ ಸಿನಿಮಾದ ಯೋಜನೆಯ ತಯಾರಿ ನಡೆಸಿದ್ದಾರೆ. ಈ ಸಾರಿ ಯಾವ ಕಾರಣಕ್ಕೂ ಹಿಂದಿನ ಕಹಿ ನೆನಪು ಮರುಕಳಿಸದಂತೆ ಜಾಗ್ರತೆ ವಹಿಸಿಕೊಂಡಿದ್ದಾರೆ.
‘ಪೊರ್ಕಿ’ಯಂಥಾ ಬಿಗ್ ಬಜೆಟ್ ಸಿನಿಮಾ ತಂಡದ ಚುಕ್ಕಾಣಿ ಹಿಡಿದು ಸಮರ್ಥವಾಗಿ ಚಿತ್ರೀಕರಣ ಪೂರೈಸಿ ನಿರ್ಮಾಪಕರಿಗೆ ಲಾಭ ತಂದುಕೊಟ್ಟ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಈ ಕೊಂಕಣಿ ಸಿನಿಮಾ ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಹಿರಿಯ ವಾಸ್ತು ತಜ್ಞ ಡಾ| ರಮೇಶ್ ಕಾಮತ್ ಅವರ ಶುಭ ಹಾರೈಕೆ ಮತ್ತು ಆಶೀರ್ವಾದ ಈ ತಂಡಕ್ಕಿದ್ದೇ ಇದೆ. ಇದೀಗ ಸ್ಕ್ರಿಪ್ಟ್ ಹಂತದಲ್ಲಿರುವ ಈ ಸಿನಿಮಾದೊಳಗೊಂದು ಸಿನಿಮಾ ಕಥೆ ಇಡೀ ತಂಡವನ್ನು ಬೆರಗುಗೊಳಿಸಿದೆ! ಇನ್ನೂ ಹೆಸರಿಡದ ಈ ಸಿನಿಮಾ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸೆಟ್ಟೇರಲಿದೆ ಎಂದು ನಿರ್ಮಾಪಕಿ ಮೀರಾ ಅನುರಾಧಾ ಪಡಿಯಾರ್ ಹೇಳಿಕೊಂಡಿದ್ದಾರೆ…
ನಿಮಗೆ ‘ಉಜ್ವಾಡು’ ಎಂಬ ರಾಜ್ಯಪ್ರಶಸ್ತಿ ಪುರಸ್ಕೃತ ಕೊಂಕಣಿ ಸಿನಿಮಾದ ಬಗ್ಗೆ ಗೊತ್ತಿರಬಹುದು. ಸೆನ್ಸಾರ್ ಬೋರ್ಡ್ ಮಾಜಿ ಸದಸ್ಯೆಯೂ ಆಗಿರುವ ಸಾಮಾಜಿಕ ಕಾರ್ಯಕರ್ತೆ ಮೀರಾ ಅನುರಾಧಾ ಪಡಿಯಾರ್ ನಿರ್ಮಿಸಿರುವ ಈ ಸಿನಿಮಾದ ನಂತರ ಇವರು ಮೌನಕ್ಕೆ ಶರಣಾಗಿದ್ದರು. ಈಗ ಮತ್ತೆ ಹೊಸ ಉತ್ಸಾಹದೊಂದಿಗೆ ಮತ್ತೊಂದು ಕೊಂಕಣಿ ಸಿನಿಮಾದ ಯೋಜನೆಯ ತಯಾರಿ ನಡೆಸಿದ್ದಾರೆ. ಈ ಸಾರಿ ಯಾವ ಕಾರಣಕ್ಕೂ ಹಿಂದಿನ ಕಹಿ ನೆನಪು ಮರುಕಳಿಸದಂತೆ ಜಾಗ್ರತೆ ವಹಿಸಿಕೊಂಡಿದ್ದಾರೆ.
‘ಪೊರ್ಕಿ’ಯಂಥಾ ಬಿಗ್ ಬಜೆಟ್ ಸಿನಿಮಾ ತಂಡದ ಚುಕ್ಕಾಣಿ ಹಿಡಿದು ಸಮರ್ಥವಾಗಿ ಚಿತ್ರೀಕರಣ ಪೂರೈಸಿ ನಿರ್ಮಾಪಕರಿಗೆ ಲಾಭ ತಂದುಕೊಟ್ಟ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಈ ಕೊಂಕಣಿ ಸಿನಿಮಾ ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಹಿರಿಯ ವಾಸ್ತು ತಜ್ಞ ಡಾ| ರಮೇಶ್ ಕಾಮತ್ ಅವರ ಶುಭ ಹಾರೈಕೆ ಮತ್ತು ಆಶೀರ್ವಾದ ಈ ತಂಡಕ್ಕಿದ್ದೇ ಇದೆ. ಇದೀಗ ಸ್ಕ್ರಿಪ್ಟ್ ಹಂತದಲ್ಲಿರುವ ಈ ಸಿನಿಮಾದೊಳಗೊಂದು ಸಿನಿಮಾ ಕಥೆ ಇಡೀ ತಂಡವನ್ನು ಬೆರಗುಗೊಳಿಸಿದೆ! ಇನ್ನೂ ಹೆಸರಿಡದ ಈ ಸಿನಿಮಾ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸೆಟ್ಟೇರಲಿದೆ ಎಂದು ನಿರ್ಮಾಪಕಿ ಮೀರಾ ಅನುರಾಧಾ ಪಡಿಯಾರ್ ಹೇಳಿಕೊಂಡಿದ್ದಾರೆ…
