Thursday, June 12, 2025
Google search engine
Homeಸುದ್ದಿಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹಾರಾಜರ 93ನೇಯ ಪುಣ್ಯಸ್ಮರಣೋತ್ಸವ...

ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹಾರಾಜರ 93ನೇಯ ಪುಣ್ಯಸ್ಮರಣೋತ್ಸವ…

ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹಾರಾಜರ 93ನೇಯ ಪುಣ್ಯಸ್ಮರಣೋತ್ಸವವೂ ದಿ.19-11-2024ರಂದು ಮುಂಜಾನೆ 11:30ಕ್ಕೆ ಪ್ರಾರಂಭಗೊಂಡಿತು. ಈ ಮೊದಲು ಸಪ್ತಾಹದಲ್ಲಿ ಭಾಗವಹಿಸಲು ಬೆಂಡವಾಡ, ಮದ್ಲುರ, ಧಾರವಾಡ, ಜಮಖಂಡಿ, ಶೇಗುಣಸಿ ಹಾಗೂ ಗಿರೀಶ ಫಾರ ಸೇರಿದಂತೆ 17ಕಡೆಗಳಿಂದ ದಿಂಡಿ ಪಲ್ಲಕ್ಕಿ ಉತ್ಸವಗಳು ಆಗಮಿಸಿದ್ದವು. ಈ ಉತ್ಸವವೂ ಹಿಪ್ಪರಗಿ ಊರಲ್ಲಿ ಮುಂಜಾನೆ 08:30ರಿಂದ ಬ್ಯಾಂಡ್ ಬಾಜಿ ಮದಾಲಿಸೆಯೊಂದಿಗೆ ಮೆರವಣಿಗೆಯ ಮೂಲಕ ಶ್ರೀಸಂಗಮೇಶ್ವರ ಮಠವನ್ನು 11:00 ಗಂಟೆಗೆ ತಲುಪಿದವು. ಇಂಚಗೇರಿ ಸಂಪ್ರದಾಯ ಪದ್ಧತಿಯಂತೆ ಪೂಜಾ ಆರತಿಯೊಂದಿಗೆ ದಾಸಭೋದ ಹಾಗೂ ವೀಣಾ ಪೂಜೆಯನ್ನು ಶ್ರೀ ಸ.ಸ.ಪ್ರಭೂಜೀ ಮಹಾರಾಜರು ನೆರವೇರಿಸಿಕೊಟ್ಟು ಸಪ್ತಾಹಕ್ಕೆ ಚಾಲನೆ ನೀಡಿದರು. ಹೀಗೆ ಧರ್ಮಸಭೆಯಲ್ಲಿ ಶ್ರೀಗುರುಸಿದ್ಧಪ್ಪ ಮಹಾರಾಜರು, ಶ್ರೀ ಅರವಿಂದ ವಕೀಲರು, ವೀರುಪಾಕ್ಷಪ್ಪ ಮಹಾರಾಜರು, ಗುರುಪಾದ ಶರಣರು, ಸಿದ್ದಲಿಂಗ ಸಾಧು ಮಹಾರಾಜರು,  ಗಿರಿಮಲ್ಲಪ್ಪ ಚನಾಳ ಮಹಾರಾಜರು ದಾಸಬೋದ ಗ್ರಂಥದ ಮೇಲೆ ಪ್ರವಚನ ನೀಡಿದರು ಆನಂತರ ಪ್ರಭೂಜೀ ಮಹಾರಾಜರು ಸಪ್ತಾಹವನ್ನು ಉದ್ದೇಶಿಸಿ ಇಂತಹ ಪವಿತ್ರವಾದ ಸಮಯವನ್ನು ಸದುಯೋಗ ಪಡಿಸಿಕೊಳ್ಳಲು ಹಾಗೂ ಸಾರ್ಥಕ ಜೀವನ ನಡೆಸಲು ಪರಿಶುದ್ಧ ಭಾವದಿಂದ ಮನಸಾರೆ ಮಾಡುವ ಕಾರ್ಯಗಳಿಗೆ ಎಲ್ಲರೂ ಸ್ಪಂಧಿಸಬೇಕು ಸಪ್ತಾಹದ ಎಲ್ಲ ವಿಧಾನಗಳಲ್ಲಿ ನಿತ್ಯ ನಿಯಮ ಉಪಾಸನೆಗಳನ್ನು ತಪ್ಪದೆ ಮಾಡುತ್ತಾ ಹಾಗೂ ಬಂದಿರುವ ಎಲ್ಲ ಮಹಾತ್ಮರ ವಾಣಿಗಳನ್ನು ಸಮಚಿತ್ತದಿಂದ ಆಲಿಸುತ್ತ ತನ್ನನ್ನು ತಾನು ಧ್ಯಾನದಲ್ಲಿ ತೊಡಗಿಸಿಕೊಂಡು ಆತ್ಮನ ಅನುಭವದ ಸಾರವನ್ನು ತನ್ನದಾಗಿಸಿಕೊಳ್ಳಬೇಕೆಂದರು. ಈ ರೀತಿಯಾಗಿ ಪ್ರತಿಯೊಬ್ಬನು ತಾನು ನಿತ್ಯ ನೇಮ ಉಪಾಸನೆ ಮಾಡಬೇಕು ಇತರರನ್ನು ಮಾಡಿಸಬೇಕು ಹೀಗೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸಬೇಕೆಂದರು. ಈ ರೀತಿಯಾಗಿ ಸಪ್ತಾಹದ ಪ್ರಾರಂಭೋತ್ಸವ ಕಾರ್ಯಕ್ರಮವು ಮಧ್ಯಾನ 1 ಗಂಟೆಗೆ ಹೂರಣ ಹೋಳಿಗೆ ಊಟದೊಂದಿಗೆ ಸಂಪನ್ನವಾಯಿತು. ಸಾಯಂಕಾಲ 05:30 ಕ್ಕೆ ಧರ್ಮ ಸಭೆಯಲ್ಲಿ ದಾಸಭೋದದ ಅತ್ಮ ಶೋಧನೆ ನಿರೂಪಣೆಯನ್ನು ವಿಷಯವಾಗಿಟ್ಟುಕೊಂಡು ಅನೇಕ ಮಹಾತ್ಮರು ಪ್ರವಚಣ ನೀಡಿದರು. ದಿ.20-11-2024 ರಂದು ಸಪ್ತಾಹದ ಕಾರ್ಯಕ್ರಮಗಳು ಎಂದಿನಂತೆ ಬೆಳಗು ಮುಂಜಾನೆ ಕಾಕಡಾರತಿಯೊಂದಿಗೆ ಪ್ರಾರಂಭವಾದಂತಹ ಕಾರ್ಯಕ್ರಮಗಳು ಎಡಬಿಡದೆ ನಡೆದು  ಮುಂಜಾನೆ 11:00 ರಿಂದ 02:00 ಗಂಟೆಯವರೆಗೆ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಗೋಷ್ಠಿ ಪ್ರಸ್ತುತ ಶಿಕ್ಷಣದ ಬಗ್ಗೆ ಡಾ.ಚೆನ್ನಮಲ್ಲಸ್ವಾಮಿ ಮಠಪತಿ ಇವರಿಂದ ಹಾಗು ಮಾಜಿ ತಹಸೀಲ್ದಾರ್ ಶ್ರೀ ಬಾದಾಮಿಯವರಿಂದಬೋಧನೆ ಮಾಡಿದರು,ಆನಂತರ ಶ್ರೀ ಸದ್ಗುರು ಪ್ರಭುಜಿ ಮಹಾರಾಜರಿಂದ ವಿದ್ಯಾರ್ಥಿಗಳ ಜೊತೆಗೆ ಸಂವಾದದೊಂದಿಗೆ ಸುದೀರ್ಘ ಸಂವಾದ ಮಾಡಿ ಪ್ರಸ್ತುತ ಶಿಕ್ಷಣದಲ್ಲಿ ಬದಲಾವಣೆ ಅವಶ್ಯವಿದ್ದು ಅದಕ್ಕೆ ಆಧ್ಯಾತ್ಮವನ್ನು ಅನು ಪಾಲನೆ ಮಾಡಬೇಕೆಂದ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಗೋಷ್ಠಿಯಲ್ಲಿ ಸಿದ್ದರಾಮೇಶ್ವರ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಂಸ್ಥೆಯ ಹಾಗು ಬಸವೇಶ್ವರ ಶಿಕ್ಷಣ ಸಂಸ್ಥೆಯ
ಶಿಕ್ಷಕ ವೃಂದ ಹಾಗೂ ಸಾವಿರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಆನಂತರ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಆಯಿತು.
ಸಾಯಂಕಾಲ 5:30ಕ್ಕೆ ಬೃಹತ್ತಾದಂತ ಸರ್ವಧರ್ಮ ಜನ ಏಕತಾ ಸಮಾವೇಶವೂ ಜರುಗಿತು. ಈ ಸಮಾರಂಭವನ್ನು ಉದ್ದೇಶಿಸಿ ಅನೇಕ ಮಹಾತ್ಮರು ತಮ್ಮ ಅನುಭವದೊಂದಿಗೆ ಪ್ರವಚಣ ನೀಡಿದರು. 08:30ಕ್ಕೆ ಶ್ರೀ ಸ.ಸ.ಪ್ರಭೂಜಿ ಮಹಾರಾಜರ ಸಾನಿಧ್ಯದಲ್ಲಿ ಶ್ರೀ ಸಿದ್ದಲಿಂಗ ಸಾಧು ಮಹಾರಾಜರು, ಶ್ರೀ ಹನಮಂತಪ್ಪ ಮಹಾರಾಜರು ಶೇಗುಣಸಿ, ಡಾ. ನಿರೂಪಾಧಿಶ್ವರ ಸ್ವಾಮೀಜಿ ಮರೆಗುದ್ದಿ , ಮಹಾವೀರಪ್ರಭು ಹಳಿಂಗಳಿ,  ಶಶಿಕಾಂತ ಪಡಸಲಗಿ, ವಿರೂಪಾಕ್ಷಪ್ಪ ಮಹಾರಾಜರು, ಬಾಗಲಕೋಟೆ ಸಂಸದರಾದ ಸನ್ಮಾನ್ಯ ಪಿ ಸಿ ಗದ್ದಿಗೌಡರ, ಜಿ ಎ ಪತ್ತಾರ ಗುರುಗಳು ಈ ಎಲ್ಲ ಮಹಾತ್ಮರ ಅಮೃತ ಹಸ್ತದಿಂದ ಕಲಿಯುಗದ ಕಲ್ಪತರು “ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹಾರಾಜರ ಜೀವನ ಚರಿತ್ರೆಯ ” ಇಂಗ್ಲಿಷ್ ಹಾಗು ಹಿಂದಿ ಭಾಷೆಯ ಗ್ರಂಥವನ್ನು ಬಿಡುಗಡೆ ಮಾಡಿ ಲೋಕಾರ್ಪಣೆ ಮಾಡಿದರು.  ಮೂರು ವರ್ಷದ ಹಿಂದೆ  ಹಿಪ್ಪರಗಿಯ ಶ್ರೀ ಸಂಗಪ್ಪ ಚ ಪಾಟೀಲ್ ರವರ ಪ್ರಕಾಶನದ ಕನ್ನಡ ಭಾಷೆಯ ಈ ಗ್ರಂಥವನ್ನು ಶ್ರೀಮತಿ ವೀರಶ್ರೀ ಸುರೇಂದ್ರ ಸಮಾಜೆ ಹಿಂದಿ ಶಿಕ್ಷಕಿ (ಅಲಗವಾಡಿ) ರವರು ಹಿಂದಿ ಭಾಷೆಗೆ ಭಾಷಾಂತರಿಸಿರುತ್ತಾರೆ. ಹಾಗೆಯೇ ಶ್ರೀ ರವೀಂದ್ರ ಹಳಂಗಳಿ ಅವರು ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದಾರ. ಅದೇ ರೀತಿ ಈ ಪುಸ್ತಕದ ಮೇಲೆ ಎನ್ ಎಸ್ ದೇವರವರ್ ವಕೀಲರು ಹಾಗೂ ಹಳಿಂಗಳಿ ವಕೀಲರು ಜಿಎ ಪತ್ತಾರ ಗುರುಗಳು ಹೀಗೆ ಅನೇಕ ಮಹಾತ್ಮರು ತಮ್ಮ ವಿಚಾರವನ್ನು ವ್ಯಕ್ತಪಡಿಸಿದರು. ಈ ಇಂಗ್ಲೀಷ್ ಹಾಗೂ ಹಿಂದಿ ಗ್ರಂಥದಾನಿಗಳಾದ ರಮೇಶ್ ಶಂಕ್ರಪ್ಪ ಇಮ್ಮೆನ್ನವರ ಪುಣೆ, ವಿಠ್ಠಲ್ ಪತ್ತಾರ್ ದುರದುಂಡಿ, ಪ್ರಕಾಶ್ ಕೊಟಭಾಗಿ ಬೆಂಡವಾಡ, ನಾಗೇಂದ್ರ ಬಿರಾದರ್ ಪಾಟೀಲ್ ಶಿರಾಗಾಂವ, ಮಹೇಶ್ ದುಂಡಪ್ಪ ಕೊಟಬಾಗಿ ಬೆಳಗಾವಿ.  ಆನಂತರ  ಕೃಷ್ಣನಂದ ಅವಧೂತ್ ಸ್ವಾಮಿಗಳು ಜಮಖಂಡಿ ಹಾಗು ಡಾ. ನಿರುಪಾದೀಶ್ವರ ಸ್ವಾಮೀಜಿಗಳು ಮರೆಗುದ್ದಿ,
ಆನಂತರ ಆಗಮಿಸಿದ ಎಲ್ಲಾ ಪೂಜ್ಯರು ಪ್ರವಚನ ನೀಡಿದರು. ಆನಂತರ ಶ್ರೀ ಸ.ಸ. ಪ್ರಭೂಜಿ ಮಹಾರಾಜರ ಆಶೀರ್ವಚನದೊಂದಿಗೆ ಸಭೆಯು ಮಂಗಲಗೊಂಡಿತು.
ದಿ. 21-11-2024ರಂದು ಮುಂಜಾನೆ ನಿತ್ಯ ನಿಯಮದೊಂದಿಗೆ ಸಪ್ತಾಹ ಪ್ರಾರಂಭವಾಗಿ ಶ್ರೀ ಗಿರಿಮಲ್ಲೇಶ್ವರ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರ ಮಾರ್ಗದರ್ಶನದಲ್ಲಿ “ಮಾಧವಾನಂದ ಯೋ ಶೇಗುಣಸಿ” ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು “ಇಂಚಗೇರಿ ಅಧ್ಯಾತ್ಮ ಸಾಂಪ್ರದಾಯ ಗುರುಲಿಂಗ ಜಂಗಮ ಮಹಾರಾಜ” ಭಕ್ತಿಯ ಸಾಲುಗಳನ್ನು ನಿರ್ದೇಶಕ ರಾಜರವಿಶಂಕರ್ (ವಿ ರವಿ) ಬರೆದಿದ್ದು, ಈ ಹಾಡನ್ನು ರವೀಂದ್ರ ಸೊರಗಾವಿ ಹಾಡಿದ್ದಾರೆ. ಎ ಟಿ ರವೀಶ್ ಸಂಗೀತ ನೀಡಿದ್ದಾರೆ.
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಲಿರಿಕಲ್‌ ವಿಡಿಯೋ ವೀಕ್ಷಿಸಿದ ಸುದರ್ಶನ ಮಹಾರಾಜ ಕಡಕಿ, ಆನಂದಸಿದ್ದ ಮಹಾರಾಜ ಅಸುರ್ಲೆ, ಮಹಾದೇವ ಮಹಾರಾಜ ನಂದಗಾಂವ, ಸಿದ್ದಾರೂಢ ಶರಣರು ಹಿಪ್ಪರಗಿ,ಸಿದ್ದಲಿಂಗ ಮಹಾರಾಜರು ಹಿಪ್ಪರಗಿ, ಶಾಸಕ ಸಿದ್ದು ಸವದಿ, ಸಿದ್ದು ಕೊಣ್ಣೂರ, ಗಿರೀಶ್ ಜಿಡ್ಡಿಮನಿ,ಭಾವುರಾಜ ಜಿಡ್ಡಿಮನಿ, ನಟ ವಿಶ್ವಪ್ರಕಾಶ್ ಟಿ ಮಲಗೊಂಡ, ಪ್ರಕಾಶ ಕಾಲತಿಪ್ಪಿ, ಮಲ್ಲಿಕಾರ್ಜುನ ಕಾಲತಿಪ್ಪಿ ಸೇರಿದಂತೆ ಸಾಧು ಸತ್ಪುರುಷರು ಗಣ್ಯರು ಉಪಸ್ಥಿತರಿದ್ದರು.
ನಂತರ ಶ್ರೀ ಸ.ಸ.ಪ್ರಭೂಜಿ ಮಹಾರಾಜರ ವಿಮಲ ಬ್ರಹ್ಮ ನಿರೂಪಣೆಯೊಂದಿಗೆ ಸಪ್ತಾಹವು ಮಂಗಲಗೊಂಡಿತು. ಸಪ್ತಾಹದಲ್ಲಿ ದಾಸಭೋದಗ್ರಂಥವನ್ನು ಇಂಚಗೇರಿ ಮಠದ ಅರ್ಚಕರಾದ ಶ್ರೀ ಭಾಸ್ಕರ ಗಿರೀಶ ಪೂಜಾರಿಯವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಪ್ತಾಹದಲ್ಲಿ ಸಂಗೀತಸೇವೆ ಭಜನಾ ಸೇವೆ, ನಾಟಕ ನೃತ್ಯ ಸೇವೆ, ಪ್ರಸಾದ ಸೇವೆ ಮಾಡಿದಂತ ಎಲ್ಲರಿಗೂ -ಹರಗುರುಚರಮೂರ್ತಿಗಳಿಗೂ ಶಾಲು ಹೊದಿಸಿ ನೆನಪಿನ ಕಾಣಿಕೆ ಕೊಟ್ಟು ಸತ್ಕರಿಸಲಾಯಿತು. ಸತತ ಈ ಮೂರು ದಿನ ಜಾಗರಣೆ ನಿಮಿತ್ಯ ನಾಟಕ ಬಳಗದವರಿಂದ ನಾಟಕಗಳು, ಸಂಗೀತ ಬಳಗದವರಿಂದ ಭಜನಾ, ಅನುಭವ ಪದ, ಹೀಗೆ ಸತತವಾಗಿ ಸಾಂಗವಾಗಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಲೆ ಇದ್ದವು, ಒಂದು ಕಡೆ ನದಿ ತೀರ್ಥ ಸ್ನಾನ, ದಂಡವತ್ತ ಪ್ರಣಾಮಗಳು, ಅಸಂಖ್ಯಾತ ದಂಡೋತ್ತ ಪ್ರಣಾಮಗಳು, ಹಾಗೇಯೇ ಸಂಗಮನಾಥ ದರ್ಶನ ಆಶೀರ್ವಾದ ಪಡೆಯುವ ಭಕ್ತರ ಅಸಂಖ್ಯಾತ ಭಕ್ತರ ಸಾಲು ಸಾಲುಗಳು ಮತ್ತೊಂದಡೆ ಭಜನಾ ಮೇಳಗಳ ನೀನಾದವು, ಮಗುದೊಂದೆಡೆ ನಾಟಕಗಳು, ಮಗ್ಗುಲಲ್ಲಿ ಬೆಂಡು ಬೆತ್ತಾಸೆ ಮಿಠಾಯಿ ಚಹಾ ಪಾಣಿ ಹಾಗೂ ಮನೆಗೆ ಬೇಕಾಗುವ ಗ್ರಹ ಉಪಕರಣಗಳು ಹೀಗೆ ಜಾತ್ರಾ ಮಹೋತ್ಸವದ ನೀನಾದದೊಂದಿಗೆ ಅಪಾರ ಜನಸ್ತೋಮದಿಂದ ವಿದ್ಯುತ್ ದೀಪಗಳ ಅಲಂಕೃತಗೊಂಡ ಜಾತ್ರೆಯ ಅಲಂಕಾರ ಸೊಬಗನ್ನು ತುಂಬಿಕೊಳ್ಳಲು ಸಾಲದೇ ಹೋದವು. ಇವೆಲ್ಲಕ್ಕೂ ತೃಪ್ತಿ ಪಡಿಸುವಂತ ಭೋಜನ ಹಾಗೂ ಪ್ರಸಾದ ವ್ಯವಸ್ಥೆಯು ಅವಿರತವಾಗಿ ನಡೆದಿರುವುದು ವಿಶೇಷವಾಗಿತ್ತು. ಸಾಯಂಕಾಲ ಜಂಗಿ ನಿಕಾಲಿ ಕುಸ್ತಿ ಜರುಗಿದವು ನೂರಾರು ಕುಸ್ತಿ ಪಟುಗಳು ಭಾಗವಹಿಸಿದ್ದರು ಕೊನೆಯ ಜೋಡಿ ಇಬ್ಬರೂ ಪೈಲ್ವಾನರ ಸಮಪಣೆಯೊಂದಿಗೆ ಮುಕ್ತಾಯವಾಯಿತು. ಪೈಲ್ವಾನ್ ಜಿಡ್ಡಿಮನಿಯವರು ಈ ಕುಸ್ತಿ ಪಂದ್ಯಾವಳಿಯನ್ನು ನೆರವೇರಿಸಿ ಕೊಟ್ಟರು.

RELATED ARTICLES
- Advertisment -
Google search engine

Most Popular

Recent Comments